ರಾಷ್ಟ್ರೀಯ ಬಿಲ್ಲವ ಮಹಾಮಂಡಲ(ರಿ.),ಮೂಲ್ಕಿ ಇದಕ್ಕೆ ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಪ್ರತಿನಿಧಿಯಾಗಿ ಅಳಿಯೂರು ನವೋದಯ ರುಕ್ಕಯ್ಯ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತೆಂದು ಶಿರ್ತಾಡಿ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಸೋಮನಾಥ ಶಾಂತಿ ಅವರು ತಿಳಿಸಿದ್ದಾರೆ.
ಗೌರವಾಧ್ಯಕ್ಷರಾದ ಅಶೋಕ್ ಕುಮಾರ್ ಮಾಂಟ್ರಾಡಿ,ಅಭಿವೃದ್ಧಿ ಸಂಚಾಲಕರಾದ ಪದ್ಮನಾಭ ಕೋಟ್ಯಾನ್, ವಿನೋದ ಸುಧಾಕರ್ ಮೂಡುಕೊಣಾಜೆ,ವಿಶ್ವನಾಥ ಕೋಟ್ಯಾನ್ ಹನ್ನೇರ್, ಅಪ್ಪು ಪೂಜಾರಿ ಕುಜುಂಬಡೆ,ಸುರೇಶ್ ಪೂಜಾರಿ ಆನೆಗುಡ್ಡೆ,ಪ್ರಧಾನ ಕಾರ್ಯದರ್ಶಿ ಕುಶಲ್ ಕುಮಾರ್ ಹೌದಾಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











