ದೀಪಾವಳಿ ಹಬ್ಬದ ಪ್ರಯುಕ್ತ ಟ್ರ್ಯಾಕ್ಟರನ್ನು ತೊಳೆಯಲೆಂದು ಬಾವಿಯ ಬಳಿ ಹೋದ ಟ್ರ್ಯಾಕ್ಟರ್ ಸಮೇತ ಅದರ ಚಾಲಕ ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ಮಾಂಟ್ರಾಡಿಯ ಬೋಂಟಮಾರು ಎಂಬಲ್ಲಿ ನಡೆದಿದೆ.
ಮಾಂಟ್ರಾಡಿ ನಿವಾಸಿ ರಾಜೇಶ್ ಎಂಬವರು ಮೃತಪಟ್ಟ ದುರ್ದೈವಿ.
ರಾಜೇಶ್ ಅವರು ಶಿರ್ತಾಡಿಯಲ್ಲಿ ಘನವಾಹನಗಳ ಬಾಡಿಗೆ ನಡೆಸುತ್ತಿದ್ದು ತನ್ನ ಸ್ನೇಹಿತನ ಟ್ರ್ಯಾಕ್ಟರನ್ನು ತೊಳೆಯಲೆಂದು ಕೊಂಡು ಹೋಗಿದ್ದನೆನ್ನಲಾಗಿದೆ
ಹೆಚ್ಚಿನಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.






