ವಾಲ್ಪಾಡಿ ನೂರುಲ್ ಹುದಾ ಮದರಸದಲ್ಲಿ ಶಿಕ್ಷಕ- ರಕ್ಷಕರ ಸಂಘದ ಸಭೆಯು ಮಸೀದಿ ಕಮಿಟಿ ಅಧ್ಯಕ್ಷ ಶರೀಫ್ ಎಂ.ಎಂ.ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಖತೀಬರಾದ ಹಮೀದ್ ದಾರಿಮಿ ಅವರು ದುವಾ ನೆರವೇರಿಸಿದರು.
ಸದರ್ ಉಸ್ಮಾನ್ ಬಾಖವಿ ಸಭೆಯನ್ನು ನಡೆಸಿಕೊಟ್ಟರು.
ಮದರಸ ವಿದ್ಯಾರ್ಥಿಗಳ ಹಾಜರಾತಿ,ಶಿಸ್ತು, ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಲಾಯಿತು.
ಶಿಕ್ಷಕ ರಕ್ಷಕ ಸಂಘದ ಮುಸ್ತಫಾ ಹನೀಫಿ,ಜಲೀಲ್ ಸಖಾಫಿ,ಇಬ್ರಾಹಿಂ,ಮಸೀದಿ ಕಮಿಟಿ ಕಾರ್ಯದರ್ಶಿ ಝಕರಿಯಾ ಯೂಸುಫ್, ಗೌರವಾಧ್ಯಕ್ಷ ಮುಹಮ್ಮದ್ ದೋಣಿಬಾಗಿಲು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






