ಚಾ ಪರ್ಕ ಕಲಾವಿದೆರ್ ಕುಡ್ಲ ತಂಡದ, ದೇವದಾಸ್ ಕಾಪಿಕಾಡ್ ಅವರ ಈ ವರ್ಷದ ಹೊಸ ನಾಟಕ ‘ ಸುಣ್ಣದ ಬೊಟ್ಟು’ ನಾಟಕದ ಮುಹೂರ್ತವು ಬುಧವಾರ ಬೆಳಿಗ್ಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.
ದೇವದಾಸ್ ಕಾಪಿಕಾಡ್,ತಂಡದ ನಿರ್ವಾಹಕಿ ಶರ್ಮಿಳಾ ಡಿ.ಕಾಪಿಕಾಡ್, ಹಿರಿಯ ಕಲಾವಿದರಾದ ಸದಾಶಿವ ಅಮೀನ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಸಾಯಿಕೃಷ್ಣ, ಪಾಂಡುರಂಗ ಅಡ್ಯಾರ್ ಮತ್ತಿತರ ಕಲಾವಿದರು, ತಂಡದ ತಾಂತ್ರಿಕ ವರ್ಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಾಟಕದ ಮೊದಲ ಪ್ರದರ್ಶನ ಸೆಪ್ಟೆಂಬರ್ ನಲ್ಲಿ ನಡೆಯಲಿದೆ.






