Latest News

ನೀವು ಪಾಂಡವರ ಗುಹೆ ನೋಡಿದ್ದೀರಾ??

Picture of Namma Bedra

Namma Bedra

Bureau Report

ದರೆಗುಡ್ಡೆಯ ಇಟಲ ಕ್ಷೇತ್ರದಲ್ಲೀಗ ಬ್ರಹ್ಮಕಲಶೋತ್ಸವದ ಸಂಭ್ರಮ.ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ಯಶಸ್ವಿಯಾಗಿ, ಬಹಳಷ್ಟು ಅಚ್ಚುಕಟ್ಟಾಗಿ ನಡೆಯುತ್ತಿದೆ.
ಈ ಸಂಭ್ರಮದ ನಡುವೆಯೇ ಇಲ್ಲೇ ಪಕ್ಕದಲ್ಲಿರುವ ‘ ಪಾಂಡವರ ಗುಹೆ’ ಮತ್ತೆ ಪ್ರಸಿದ್ಧಿಗೆ ಬಂದಿದೆ. ಯುವಕರ ತಂಡವೊಂದು ಮಾಡಿರುವ ಈ ಪಾಂಡವರ ಗುಹೆಯ ಕುರಿತಾದ ಸಣ್ಣ ವೀಡಿಯೋ ಸಖತ್ ವೈರಲ್ ಆಗುತ್ತಿದೆ.ಅದು ಹೆಚ್ಚಿನವರ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಮಿಂಚುತ್ತಿದೆ.


ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಹೆಗ್ಗಡೆಯವರು ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಒಂದು ದಿನ ಭಾಗವಹಿಸಿ ‘ ಮಾಗಣೆಯವರು,ಭಕ್ತರು ಹೊಣೆ ಹೊತ್ತಾಗ ದೇಗುಲ ಅಭಿವೃದ್ಧಿ ಸಾಧ್ಯ ‘ ಎನ್ನುವಂತಹ ಮಾತನ್ನು ಹೇಳಿದ್ದರು.ಇಲ್ಲಿ ಅದೇ ಆಗುತ್ತಿರೋದು.
ಕಳೆದ ಎರಡು ವರ್ಷಗಳಿಂದ ಈ ಭಾಗದ ಭಕ್ತರು, ಮಾಗಣೆಯವರು,ವಿವಿಧ ಸಮಿತಿಗಳ ಜವಾಬ್ದಾರಿ ಹೊತ್ತವರ ನಿರಂತರ ಶ್ರಮದ ಫಲದಿಂದ ಇಟಲ ಕ್ಷೇತ್ರ ರಾಜ್ಯದಾದ್ಯಂತ ಮತ್ತಷ್ಟು ಪ್ರಸಿದ್ಧಿ ಪಡೆದಿದೆ.


ಈ ಕ್ಷೇತ್ರದತ್ತ ಹೋಗುವುದೇ ಒಂದು ವಿಶೇಷ ಅನುಭವವನ್ನು ಕೊಡುತ್ತದೆ.ತನ್ನದೇ ಆದ ವಿಶಿಷ್ಟ ಇತಿಹಾಸವನ್ನು ಹೊಂದಿರುವ ಕ್ಷೇತ್ರದಲ್ಲಿ ಆನೆಯಾಕಾರದ ಕಲ್ಲೊಂದಿದೆ.ಅದು ದೇವಸ್ಥಾನದ ಪಕ್ಕದಲ್ಲೇ ಇದೆ. ಆನೆಕಲ್ಲು ಎಂದೇ ಪ್ರಸಿದ್ಧಿ ಪಡೆದಿರುವ ಈ ಕಲ್ಲನ್ನು ನೋಡಲೆಂದೇ ದೊಡ್ಡ ಸಂಖ್ಯೆಯಲ್ಲಿ ಜನರು ಹೋಗುತ್ತಿದ್ದರು.ಅಲ್ಲದೆ ವರ್ಷಪೂರ್ತಿ ನೀರು ಬರುವ ಇಲ್ಲಿನ ‘ ಜಲ ಗಣೇಶ’ ಇನ್ನಷ್ಟು ಫೇಮಸ್. ಎತ್ತರದ ಗುಡ್ಡ ಪ್ರದೇಶಗಳಿಂದ ನೇರವಾಗಿ ನೀರು ಗಣೇಶ ವಿಗ್ರಹಕ್ಕೆ ಬಂದು ಬೀಳುತ್ತದೆ.ಮಳೆಗಾಲದಲ್ಲಂತೂ ಈ ದೃಶ್ಯ ನೋಡಲು ಇಲ್ಲಿಗೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.


ಇದೀಗ ಮತ್ತೆ ಆಕರ್ಷಣೀಯವಾಗಿರುವುದು ಪಾಂಡವರ ಗುಹೆ. ಇದು ಇಟಲ ಕ್ಷೇತ್ರದ ಅನತಿ ದೂರದಲ್ಲೇ ಇದೆ. ಹಿಂದೆ ಪಾಂಡವರು ಈ ಗುಹೆಯಲ್ಲಿ ವಾಸಿಸುತ್ತಿದ್ದರು ಎನ್ನುವ ಪ್ರತೀತಿ ಇದೆ.
‘ಬೆಟ್ಟಾ ಹತ್ತೋಗಬೇಕು..ಬೆಟ್ಟಾ ಇಳಿದೋಗಬೇಕು’ ಎನ್ನುವಂತೆ ಈ ಗುಹೆಯತ್ತ ಹೋಗಬೇಕಾದರೆ ಅಂತಹ ಸಣ್ಣ ಸಾಹಸ ಮಾಡಬೇಕು. ಚಾರಣಿಗರಿಗೆ ಇದು ಇಷ್ಟವಾದೀತು. ಇಟಲ ಕ್ಷೇತ್ರದತ್ತ ಬಂದವರೊಮ್ಮೆ ಈ ಪಾಂಡವರ ಗುಹೆಯತ್ತ ಹೋಗದಿದ್ದರೆ ಹೇಗೆ ?
ನೀವು ನೋಡದಿದ್ದರೆ ಮತ್ತೆ ತಡವೇಕೆ? ಇಂದೇ ಹೊರಟು ಬನ್ನಿ….

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top