ಟ್ರಕ್ಕಿಂಗ್ ಗೆಂದು ಬಂದಿದ್ದ ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಯುವಕ ಪುತ್ತೂರು ಮೂಲದವನೆಂದು ಹೇಳಲಾಗುತ್ತಿದೆ.
ಪಡುಕೊಣಾಜೆ ಗ್ರಾಮದ ಕೊಣಾಜೆಕಲ್ಲಿಗೆ ಯುವಕರ ತಂಡವೊಂದು ಇಂದು ಬೆಳಿಗ್ಗೆ ಬಂದಿದ್ದು ಈ ಪೈಕಿ ಯುವಕನೋರ್ವ ಕೊಣಾಜೆಕಲ್ಲಿನ ತುದಿಗೇರಿದ್ದಾನೆ.ಅಲ್ಲೇ ಆತನಿಗೆ ಎದೆನೋವು ಕಾಣಿಸಿದೆ. ಹೃದಯಾಘಾತ ಸಂಭವಿಸಿ ಕುಳಿತಲ್ಲೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ






