ಕಳೆದ ಮೇ.ತಿಂಗಳಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಶ್ರೇಯಾಂಕ್ ಆರ್.ಶೆಟ್ಟಿ 262 ಅಂಕಗಳೊಂದಿಗೆ ತೇರ್ಗಡೆಹೊಂದಿದ್ದಾನೆ.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಆ ಪೈಕಿ ಶ್ರೇಯಾಂಕ್ ಆರ್.ಶೆಟ್ಟಿ ಕೂಡಾ ಓರ್ವನಾಗಿದ್ದಾನೆ.
ಶ್ರೇಯಾಂಕ್ ಉದ್ಯಮಿ, ರಾಜ್ಯ ಕ್ವಾರಿ ಮತ್ತು ಕ್ರಷರ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ- ರೂಪಾ ದಂಪತಿಯ ಪುತ್ರ.






