ಮೂಡುಬಿದಿರೆ ಮಸೀದಿ ಬಳಿ ದಾನಾಮಾಲ್ ಆಗಿ ನಿರ್ಮಾಣಗೊಂಡಿದ್ದ ಬಹುಮಹಡಿಯ ಸುಂದರ ಶಾಪಿಂಗ್ ಮಾಲ್ ಇದೀಗ ಹೊಸ ಆಡಳಿತದೊಂದಿಗೆ ಸುವರ್ಣ ಸ್ಕ್ವೇರ್ ಶಾಪಿಂಗ್ ಮಾಲ್ ಆಗಿ ಶುಕ್ರವಾರ ಶುಭಾರಂಭಗೊಂಡಿದೆ.
ಸುವರ್ಣ ಸ್ಕ್ವೇರ್ ನ ಮುಖ್ಯಸ್ಥ ಮಂಗಳೂರಿನ ಬಾಲಕೃಷ್ಣ ಸುವರ್ಣ ಅವರ ಮಕ್ಕಳಾದ ಜೇಂಕಾರ್ ಕೃಷ್ಣ ಹಾಗೂ ಯುವಿಕಾ ಶ್ರೀಮಾ ಅವರು ಹೊಸ ಆಡಳಿತದ ಮಾಲ್ ಸಂಕೀರ್ಣವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುಬ್ರಹ್ಮಣ್ಯ ಭಟ್ ಅವರು ಭಾಗವಹಿಸಿ ಮಾತನಾಡಿ ‘ ಯೋಗ ಮತ್ತು ಯೋಗ್ಯತೆ ಇದ್ದಾಗ ಮಾತ್ರ ಸಲ್ಲಬೇಕಾದದ್ದು ಸಲ್ಲಬೇಕಾದವರಿಗೆ ಸಲ್ಲುತ್ತದೆ, ಬಾಲಕೃಷ್ಣ ಸುರ್ಣರಿಗೆ ಈ ಸುವರ್ಣಾವಕಾಶ ಲಭಿಸಿದೆ,ಈ ಸಂಸ್ಥೆ ಯಶಸ್ಸಾಗಲಿ ‘ ಎಂದು ಹಾರೈಸಿದರು.


ಮಂಗಳೂರು ಮೂಲದ ಮಲೇಶಿಯಾದ ಉದ್ಯಮಿ ಬಿಪಿನ್ ರೈ ಅವರು ಮಾತನಾಡಿ ‘ ಬೆಳೆಯುತ್ತಿರುವ ಮೂಡುಬಿದಿರೆಯಲ್ಲಿ ಈ ಸುಸಜ್ಜಿತ ಮಾಲ್ ಮತ್ತೊಂದು ಗರಿ ಮೂಡಿಸಿದೆ,ಇಲ್ಲಿ ಮಿನಿ ಥಿಯೇಟರ್, ಸ್ಟಾರ್ ಹೊಟೇಲ್ ರೂಪಿಸುವ ಯೋಜನೆಗಳು ಶೀಘ್ರದಲ್ಲೇ ಯಶಸ್ಸು ಕಾಣಲಿ’ ಎಂದು ಶುಭ ಹಾರೈಸಿದರು.
ಉದ್ಯಮಿ, ಸುವರ್ಣ ಸ್ಕ್ವೇರ್ ನ ಮುಖ್ಯಸ್ಥ ಬಾಲಕೃಷ್ಣ ಸುವರ್ಣ ಸರ್ವರ ಸಹಕಾರ ಕೋರಿದರು.


‘ ಏಸ’ ಚಿತ್ರದ ನಿರ್ದೇಶಕ ಉದಯ ಶೆಟ್ಟಿ ಕಾಂತಾವರ,ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಚಂದ್ರಹಾಸ ಸನಿಲ್,ಸಂತೋಷ್ ಶೆಟ್ಟಿ ಉದ್ಯಮಿ ಜಬ್ಬಾರ್ ಮಾರಿಪಳ್ಳ,ಅಂಬೋಡಿಮಾರ್ ರಘುನಾಥ್ ದೇವಾಡಿಗ,ಸಂಸ್ಥೆಯ ಕಾನೂನು ಸಲಹೆಗಾರ ,ನ್ಯಾಯವಾದಿ ಮೋಹನ್ ರಾಜ್,ಉದ್ಯಮಿ,ಎಂ.ಎಫ್.ಸಿ.ಚಾಯ್ ಮಾರ್ಟ್ ನ ಸಿದ್ದೀಕ್ ಮಂಗಳೂರು ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.
ಶ್ರೀಮತಿ ಸುಪ್ರಿತಾ ಬಿ.ಸುವರ್ಣ, ಮಾತೃಶ್ರೀ ನೀಲಮ್ಮ ಜಿನ್ನಪ್ಪ ಪೂಜಾರಿ, ಬೆಳ್ತಂಗಡಿ ಮದ್ದಡ್ಕದ ಜಯರಾಮ ಸಾಲ್ಯಾನ್, ಪ್ರೇಮಾ ಜೆ.ಸಾಲ್ಯಾನ್ , ಸಂಸ್ಥೆಯ ಆಡಳಿತ ವರ್ಗ,ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮನು ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.