ಇಂದು ಸಂಜೆ ಬೀಸಿದ ಬಿರುಗಾಳಿಗೆ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮನೊಟ್ಟು ಪರಿಸರದಲ್ಲಿ ಮನೆಗಳಿಗೆ, ಶಾಲೆ ಹಾಗೂ ಯುವಕ ಮಂಡಲ ಕಟ್ಟಡಕ್ಕೆ ಹಾನಿಯುಂಟಾಗಿದೆ.


ಅಮನೊಟ್ಟು ಪರಿಸರದಲ್ಲಿ ಕೆಲವು ಮನೆಗಳ ಹಂಚುಗಳು ಹಾರಿಹೋಗಿದ್ದು, ಕಂಗುಗಳು ಧರೆಗುರುಳಿದೆ.ಪಡುಮಾರ್ನಾಡು ಯುವಕ ಮಂಡಲ ಕಟ್ಟಡದ ಶೀಟುಗಳು ಹಾರಿ ಹೋಗಿದ್ದು ಅಪಾರ ನಷ್ಟವುಂಟಾಗಿದೆ.


ಪಡುಮಾರ್ನಾಡು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ,ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ ಅವರು ಹಾನಿ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
