‘ಪುರುಷ ಕಟ್ಟುನ’ ಎಂಬ ಆಚರಣೆಯ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಧರ್ಮದ ವೇಷ ಹಾಕಿ ಅಪಹಾಸ್ಯ ಮಾಡಿದ್ದಲ್ಲದೆ ಮುಸ್ಲಿಂ ಧರ್ಮದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಹದಿನೇಳು ಮಂದಿಯ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಳುನಾಡಿನ ಕೆಲವೆಡೆ ‘ ಪುರುಷ ಕಟ್ಟುನ ‘ ಎಂಬ ಆಚರಣೆ ನಡೆಯುತ್ತದೆ.ಅದಕ್ಕೆ ಅದರದ್ದೇ ಆದ ಹಿನ್ನೆಲೆಯಿದೆ. ಪೆರಾಡಿಯಲ್ಲೂ ಇಂತಹ ಒಂದು ಆಚರಣೆಯನ್ನು ಆಚರಿಸುವಾಗ ಪೆರಾಡಿ ಹಾಗೂ ಅದೇ ಪರಿಸರದ ಕೆಲ ಯುವಕರು ಮುಸ್ಲಿಂ ಧರ್ಮದ ವೇಷಹಾಕಿ ,ಇಸ್ಲಾಂ ಧರ್ಮ ಮತ್ತು ಆಝಾನ್ ಗೆ ಅವಹೇಳನ ಮಾಡಿದ್ದಾರೆ.ಈ ವೀಡಿಯೋ ಸಾಕಷ್ಟು ವೈರಲ್ ಆಗಿ ವಿರೋಧಗಳೂ ವ್ಯಕ್ತವಾಗಿತ್ತು.ಅಲ್ಲದೆ ಇಂತವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪಡಂಗಡಿ ಗ್ರಾಮದ ಮುಹಮ್ಮದ್ ರಫೀಕ್ ಎಂಬವರು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸಾವ್ಯ ನಿವಾಸಿಗಳಾದ ವಸಂತ, ರಾಜೇಶ್, ಹರೀಶ್, ಪೆರಾಡಿ ನಿವಾಸಿಗಳಾದ ದಯಾನಂದ, ರಂಗನಾಥ, ಮೋಹನ್,ಶಮಿತ್, ರವಿ,ರಮೇಶ್ ಕುಲಾಲ್,ಸುರೇಶ್, ಅಶೋಕ ಕುಲಾಲ್, ಧನುಷ್ ಹರದೊಟ್ಟು, ಹರೀಶ್ ಬಂತೊಟ್ಟು,ರಮೇಶ್ ಆರ್.ಕೆ, ಸುರೇಶ್ ಬರೊಟ್ಟು,ಪ್ರಮೋದ್, ಪ್ರಕಾಶ್ ಪೆರಾಡಿ ಹಾಗೂ ಇತರ ಇಪ್ಪತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
