ಕಳೆದ ಎಪ್ರಿಲ್ 26 ರಂದು ಕಡಲಕೆರೆ ಕೈಗಾರಿಕಾ ವಲಯದ ಗೋಡೌನ್ ಒಂದಕ್ಕೆ ನುಗ್ಗಿ ಲ್ಯಾಪ್ ಟಾಪ್ ಹಾಗೂ ನಗದನ್ನು ದೋಚಿದ್ದ ಅಂತರ್ಜಿಲ್ಲಾ ಕಳ್ಳನೋರ್ವನನ್ನು ಬಂಧಿಸುವಲ್ಲಿ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರ ತಂಡವು ಯಶಸ್ವಿಯಾಗಿದೆ.
ರಾಯಚೂರು ಜಿಲ್ಲೆಯ ತಡಕಲ್ ಗ್ರಾಮದ ಉಟಕನೂರು ಅಂಬೇಡ್ಕರ್ ಕಾಲನಿಯ ಚಂದ್ರು (33) ಎಂಬಾತನೇ ಬಂಧಿತ ಆರೋಪಿ.


ಕಡಲಕೆರೆಯ ವಿಲ್ಕಾರ್ಟ್ ಎಂಬ ಹೆಸರಿನ ಗೋಡೌನ್ ಶಟರಿನ ಬೀಗ ಒಡೆದು ಗೋಡೌನ್ ಒಳನುಗ್ಗಿ ಗೋಡೌನ್ ನಲ್ಲಿದ್ದ ಎರಡು ಲ್ಯಾಪ್ ಟಾಪ್, ನಗದು ಇದ್ದ ಲಾಕರನ್ನೇ ಕಳ್ಳತನ ಮಾಡಿರುವ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೆತ್ತಿಕೊಂಡ ಮೂಡುಬಿದಿರೆ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು.ಅದು ಹೇಗೋ ಮಾಹಿತಿ ಸಂಗ್ರಹಿಸಿ ರಾಯಚೂರು ಜಿಲ್ಲೆಯ ಚಂದ್ರು ಈ ಪ್ರಕರಣದ ಕಂಡು ಎಂದು ಗೊತ್ತಾಗುತ್ತದೆ.ಅಂತರ್ಜಿಲ್ಲಾ ಕಳ್ಳನಾಗಿರುವ ಚಂದ್ರನನ್ನು ಹೊತ್ತುತಂದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯವನ್ನು ಬಾಯಿಬಿಟ್ಟಿದ್ದಾನೆ.
ಎರಡು ಲ್ಯಾಪ್ ಟಾಪ್, ಲಾಕರ್ ಹಾಗೂ ಲಾಕರ್ ನಲ್ಲಿದ್ದ 2,88,000 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಮಹೀಂದ್ರ ಕಂಪೆನಿಯ ಬೊಲೇರೋ ಪಿಕಪ್ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 6,50,000 ಎಂದು ಅಂದಾಜಿಸಲಾಗಿದೆ.
ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದಲ್ಲಿ ಪಿ.ಎಸ್.ಐ ಪ್ರತಿಭಾ, ಎ.ಎಸ್.ಐ ರಾಜೇಶ್, ಹೆಚ್.ಸಿ.ಗಳಾದ ರಾಜೇಶ್,ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಹುಸೇನ್, ಅಕೀಲ್ ಅಹ್ಮದ್, ನಾಗರಾಜ್ ಲಮಾಣಿ ಹಾಗೂ ಪಿ.ಸಿ.ವೆಂಕಟೇಶ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.