ಮೂಡುಬಿದಿರೆ ಕಾಂಗ್ರೆಸ್ ಮುಖಂಡರಾಗಿದ್ದ ದಿ.ರಾಘು ಕೋಟ್ಯಾನ್ ಸಂಪಿಗೆ ಅವರ ಪುತ್ರ ಶಶಿ ಕೋಟ್ಯಾನ್ ಅವರು ಮುಂಬೈಯಲ್ಲಿ ರೈಲಿನಿಂದೆಸೆಯಲ್ಪಟ್ಟು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.


ಮುಂಬೈನಲ್ಲಿ ಉದ್ಯೋಗದಲ್ಲಿದ್ದ ಶಶಿ ಅವರು ಸೋಮವಾರ ರೈಲಿನಿಂದೆಸೆಯಲ್ಪಟ್ಟು ಮೃತಪಟ್ಟಿದ್ದಾರೆಂದು ಹೇಳಲಾಗಿದ್ದು ಈ ಸಾವಿನ ಬಗ್ಗೆ ಕೆಲವು ಸಂಶಯಗಳಿದೆ. ಆತನ ಸಂಬಂಧಿಕರು ಮುಂಬೈಗೆ ತೆರಳುತ್ತಿದ್ದು ಸತ್ಯ ವಿಚಾರ ಇನ್ನಷ್ಟೇ ತಿಳಿದುಬರಬೇಕಿದೆ.










