ಕಲ್ಲಮುಂಡ್ಕೂರಿನಲ್ಲಿ ನಾಳೆ ವಾದ್ಯ ಕಲಾವಿದರ ‘ಸಪ್ತಸ್ವರ ಪ್ರೀಮಿಯರ್ ಲೀಗ್’

Picture of Namma Bedra

Namma Bedra

Bureau Report

ಜಿಲ್ಲೆಯ ವಾದ್ಯಕಲಾವಿದರ ನಡುವೆ ‘ಸಪ್ತಸ್ವರ ಪ್ರೀಮಿಯರ್ ಲೀಗ್’ ಎಂಬ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟವು ನಾಳೆ ಕಲ್ಲಮುಂಡ್ಕೂರಿನ ಸರ್ವೋದಯ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪ್ರಪ್ರಥಮ ಬಾರಿಗೆ ಕಲ್ಲಮುಂಡ್ಕೂರಿನ ಪ್ರಜ್ವಲ್,ಅಕ್ಷಿತ್,ಕಿರಣ್ ಅಶ್ವತ್ಥಪುರ,ಮನೋಜ್ ಹಾಗೂ ಆನಂದ ಅವರು ಈ ಪಂದ್ಯಾಕೂಟವನ್ನು ಆಯೋಜಿಸಿದ್ದಾರೆ.
ಇತರ ಲೀಗ್ ನಂತೆ ಇಲ್ಲೂ ಐಕಾನ್, ಕ್ಯಾಪ್ಟನ್ ಎಂದು ಆಯ್ಕೆ ಮಾಡಲಾಗಿದ್ದು ಪಂದ್ಯವು ವಿಜೃಂಭಣೆಯಿಂದ ನಡೆಯಲಿದೆ. ಜಿಲ್ಲೆಯ ವಾದ್ಯಕಲಾವಿದರು ಈ ಪಂದ್ಯಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top