ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಬೆಳಕು ಪ್ರತಿಷ್ಠಾನ ಆಯೋಜಿಸಿದ್ದ ಸಾಹಿತ್ಯ ಪರ್ವ ಸ್ಪರ್ಧೆಯ ವ್ಯಕ್ತಿ ಚಿತ್ರ ವಿಭಾಗದಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ.ವಾದಿರಾಜ ಕಲ್ಲೂರಾಯ ಅವರು ಬರೆದ ಯುವರಾಜ ಜೈನ್ ಅವರ ಕುರಿತಾದ 'ಅಕ್ಷರ ಯೋಗಿಯ ಅಕ್ಷರ ಕ್ರಾಂತಿ' ಎಂಬ ಬರಹವು ಪ್ರಥಮ ಸ್ಥಾನ ಗಳಿಸಿದೆ.










