ತೆಂಗಿನಕಾಯಿ ಕೊಯ್ಯಲು ಮರವೇರಿದ ಯುವಕನೊಬ್ಬ ಆಯತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಮಾಂಟ್ರಾಡಿಯಲ್ಲಿ ನಡೆದಿದೆ.
ಮಾಂಟ್ರಾಡಿ ಗ್ರಾಮದವನೇ ಆಗಿರುವ ರಮೇಶ (38) ಮೃತಪಟ್ಟ ಯುವಕ.
ಮಾಂಟ್ರಾಡಿ ಪರಿಸರದಲ್ಲಿ ಕೂಲಿಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ರಮೇಶ ಅದೇ ಪರಿಸರದ ಮನೆಯೊಂದರ ತೆಂಗಿನ ಮರದಿಂದ ತೆಂಗಿನ ಕಾಯಿ ಕೊಯ್ಯಲೆಂದು ಮರವೇರಿದ್ದ.





