Latest News

ರಾಜ್ಯ,ರಾಷ್ಟ್ರಮಟ್ಟದ ಅಂಚೆ ವಿಭಾಗದ ಪ್ರಬಂಧ ಸ್ಪರ್ಧೆ: ಅಳಿಯೂರು ಹೈಸ್ಕೂಲ್ ವಿದ್ಯಾರ್ಥಿನಿ ತನ್ವಿಗೆ ತೃತೀಯ ಬಹುಮಾನ

Picture of Namma Bedra

Namma Bedra

Bureau Report

‘ಆಧುನಿಕ ಕಾಲದಲ್ಲಿ ಅಂಚೆ ಪತ್ರಗಳ ಪಾತ್ರ’ ಎಂಬ ವಿಷಯದಲ್ಲಿ ನಡೆದ ರಾಜ್ಯ, ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯದ ಪುತ್ತೂರು ಅಂಚೆ ವಿಭಾಗದಿಂದ ಅಳಿಯೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಕು.ತನ್ವಿ ತೃತೀಯ ಬಹುಮಾನ ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ರಾಜ್ಯದ ಬೇರೆ ಬೇರೆ ಕಡೆಯ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.ತನ್ವಿ ತೃತೀಯ ಬಹುಮಾನ ಪಡೆಯುವುದರೊಂದಿಗೆ 5 ಸಾವಿರ ನಗದು ಪಡೆದಿದ್ದಾರೆ.
ಬಹುಮಾನ ವಿಜೇತೆಗೆ ಅಳಿಯೂರು ಶಾಖೆಯ ಅಂಚೆಪಾಲಕ ವೇದಪ್ರಕಾಶ್, ಸಹಾಯಕ ಅಂಚೆಪಾಲಕ ದಾನೇಶ್ ಬಹುಮಾನ ವಿತರಿಸಿದರು.ಅಳಿಯೂರು ಪ್ರೌಢಶಾಲಾ ಶಿಕ್ಷಕ ಸುಬ್ರಹ್ಮಣ್ಯ ಅವರು ಉಪಸ್ಥಿತರಿದ್ದರು.
ಬಹುಮಾನ ವಿಜೇತೆ ತನ್ವಿ ವಾಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಯಶೋಧ ನಾಯ್ಕ್ ಅವರ ಪುತ್ರಿ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು