ರಾಮ್ ಫ್ರೆಂಡ್ಸ್ ರಿ ಕಟೀಲು ತಂಡದಿಂದ ಪೊಳಲಿ ರಾಜರಾಜೇಶ್ವರಿ ಅಮ್ಮನವರ ಜಾತ್ರೆಯಲ್ಲಿ ನಡೆದ ಆರೋಗ್ಯ ಸೇವಾ ನಿಧಿ ಅಭಿಯಾನದಲ್ಲಿ ಸಂಗ್ರಹವಾದ ಮೊತ್ತವನ್ನು ಮಂಗಳೂರು ಪಚ್ಚನಾಡಿ ನಿವಾಸಿಯಾಗಿರುವ ತನುಷ್(4 ವರ್ಷ) ಎಂಬ ಮಗುವಿಗೆ ಕಿವಿಯ ಸಾಧನವನ್ನು ಅಳವಡಿಸುವ ಚಿಕಿತ್ಸೆಗೆ ಪ್ರಧಾನ ಅರ್ಚಕರಾದ ರಾಮ್ ಭಟ್ ಪೊಳಲಿ ಇವರ ಅಭಯ ಹಸ್ತದಿಂದ 64,000 ರೂಪಾಯಿಯ ಚೆಕ್ಕನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತದ ಮಂಡಳಿಯ ಅಧಿಕಾರಿ ನಾಗೇಶ್ ಪೊಳಲಿ ತಂಡದ ಸ್ಥಾಪಕಧ್ಯಕ್ಷರಾದ ರಮಾನಂದ ಪೂಜಾರಿ ಕಟೀಲು, ಅಧ್ಯಕ್ಷರಾದ ಸುಮಂತ್ ಸುವರ್ಣ ಬಡಗಮಿಜಾರು, ಉಪಾಧ್ಯಕ್ಷರಾದ ರಾಕೇಶ್ ಪೊಳಲಿ ಸದಸ್ಯರಾದ, ಗುರುಪ್ರಸಾದ್ ಮುಲ್ಕಿ , ನಿರಂಜನ್ ಕರ್ಕೇರ, ರಾಕೇಶ್ ಬಜ್ಪೆ,ನಾಗೇಶ್, ದಿನೇಶ್, ರೂಪೇಶ್, ಅಜಿತ್ ಆಚಾರ್ಯ ಉಪಸ್ಥಿತರಿದ್ದರು
