ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ರಕ್ಷಾ ಸಮಿತಿಯ ಸದಸ್ಯರಾಗಿ ಪಡುಮಾರ್ನಾಡು ಗ್ರಾ.ಪಂ.ಮಾಜಿ ಸದಸ್ಯ ರಮೇಶ್ ಎಸ್.ಶೆಟ್ಟಿ ಸಹಿತ ಆರು ಮಂದಿ ನೇಮಕಗೊಂಡಿದ್ದಾರೆ.
ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ, ಪಡುಮಾರ್ನಾಡು ಗ್ರಾ.ಪಂ.ನ ಮಾಜಿ ಸದಸ್ಯ, ಪಡುಮಾರ್ನಾಡು ಯುವಕ ಮಂಡಲದ ಮಾಜಿ ಅಧ್ಯಕ್ಷ ರಮೇಶ್ ಶೆಟ್ಟಿ, ಶಿರ್ತಾಡಿಯ ಆಪತ್ಬಾಂಧವ ಸೂರಜ್ ಕುಮಾರ್, ಪುರಸಭಾ ಮಾಜಿ ಸದಸ್ಯ ಸುರೇಶ್ ಪ್ರಭು,ಸುರೇಶ್ ದೇವಾಡಿಗ, ಕಿರಣ್ ಕುಮಾರ್ ಹಾಗೂ ಸುಪ್ರಿಯಾ ಡಿ.ಶೆಟ್ಟಿ ಅವರು ಸದಸ್ಯರಾಗಿ ನೇಮಕಗೊಂಡಿದ್ದಾರೆ.





