ಮುಹಿಯುದ್ದೀನ್ ಜುಮ್ಮಾ ಮಸೀದಿ, ಪೇರಂದಡ್ಕ,ಕಾಶಿಪಟ್ಣ ಇಲ್ಲಿನ ಆಡಳಿತ ಕಮಿಟಿಯ ನೂತನ ಅಧ್ಯಕ್ಷರಾಗಿ ದಾವೂದ್ ತೋಡಾರ್ ಅವರು ಆಯ್ಕೆಯಾಗಿದ್ದಾರೆ.
ಸಮಿತಿಯ ಗೌರವಾಧ್ಯಕ್ಷರಾದ ಬಿ.ಕೆ.ಅಬ್ದುಲ್ ಖಾದರ್ ಖಾಸಿಮಿ,ಬಂಬ್ರಾಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಅಬೂಬಕ್ಕರ್ ಮರೋಡಿ, ಅಬ್ದುಲ್ ರಹಿಮಾನ್ ಅತ್ರಾಸ್, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಚ್.ಅಬ್ದುಲ್ ರಹಿಮಾನ್, ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಕಾಶಿಪಟ್ಣ, ಕೋಶಾಧಿಕಾರಿಯಾಗಿ ಶಬ್ಬೀರ್ ದಾರುನ್ನೂರ್, ವರ್ಕಿಂಗ್ ಸೆಕ್ರೆಟರಿ ಆಗಿ ಖಾಲಿದ್ ಅಬ್ದುಲ್ ಖಾದರ್, ಸದಸ್ಯರಾಗಿ ಕೆ.ಎಸ್.ಪುತ್ತುಮೋನು,ಇಸ್ಮಾಯಿಲ್ ಕೆ, ಎಚ್.ಅಬ್ದುಲ್ ರಹಿಮಾನ್, ನವೀದ್ ಶಾಲಾಬಳಿ, ಸಿದ್ದೀಕ್ ಆಟೊ ಹಾಗೂ ಗಫೂರ್ ಧೂಮಾಡಿ ಅವರು ಆಯ್ಕೆಯಾಗಿದ್ದಾರೆ.






