ಯುವಕ ಮಂಡಲ (ರಿ.) ಪಡುಮಾರ್ನಾಡು ಇದರ ನೂತನ ಅಧ್ಯಕ್ಷರಾಗಿ ಒಂಭತ್ತನೇ ಬಾರಿಗೆ ರಮೇಶ್ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸುರೇಂದ್ರ ಸಿ, ಶೈಲೇಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಭವಿಷ್ಯತ್ ಕೋಟ್ಯಾನ್, ಜೊತೆ ಕಾರ್ಯದರ್ಶಿಯಾಗಿ ಸಂದೀಪ್ ಆಚಾರ್ಯ, ಕೋಶಾಧಿಕಾರಿಯಾಗಿ ಪ್ರಜ್ವಲ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಯಾಗಿ ರೋಹಿತ್ ಅಂಚನ್,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಿನೇಶ್ ಆರ್.ಶೆಟ್ಟಿ, ಗೌರವಾಧ್ಯಕ್ಷರಾಗಿ ಸಂತೋಷ್ ಆರ್.ಶೆಟ್ಟಿ, ಮುಹಮ್ಮದ್ ಹಾರಿಸ್,ಸತೀಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ಮಾಡಂದೇಲ್,ಭರತ್ ಕೆ.ಶೆಟ್ಟಿ, ಅನುಷ್, ಸಂತೋಷ್ ಕೋಟ್ಯಾನ್, ಗೌರವ ಸಲಹೆಗಾರರಾಗಿ ಜಯ ಬಿ, ರತ್ನಾಕರ ಹೆಗ್ಡೆ,ದಾಮೋದರ ಕೆ, ಎ.ಯತೀಂದ್ರ ರಾವ್ ,ಭಾಸ್ಕರ ದೇವಾಡಿಗ ಹಾಗೂ ಉದಯ ದೇವಾಡಿಗ ಅವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಮೇಶ್ ಶೆಟ್ಟಿ ಅವರು ಈ ಹಿಂದೆ ಎಂಟು ಬಾರಿ ಅಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ಅವರ ಅಧ್ಯಕ್ಷತಾವಧಿಯಲ್ಲಿ ನಡೆದಿತ್ತು.ಇದೀಗ ಮತ್ತೊಮ್ಮೆ ಅವರನ್ನು ಹಿರಿಯ ಕಿರಿಯರು ಸೇರಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಕೆಲವು ಬಾರಿ ಆಯ್ಕೆಯಾಗಿರುವ ರಮೇಶ್ ಶೆಟ್ಟಿ ಅವರು ಸ್ಥಳೀಯವಾಗಿ ‘ ಬಬ್ಬಣ್ಣ’ ಎಂದೇ ಖ್ಯಾತರಾಗಿದ್ದಾರೆ.
ಪ್ರಸ್ತುತ ಮೂಡುಬಿದಿರೆ ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ.







































